ಗ್ರಾಮದ ಜನರಿಗೆ ಗೊಚ್ಚೆ ನೀರನ್ನು ಕುಡಿಸಿದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ.!?
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಯಲ್ಲಿ
ಸುಮಾರು 50 ಲಕ್ಷ ವೆಚ್ಚದ ಕುಡಿಯುವ ನೀರಿನ ಸರ್ಕಾರದ ಯೋಜನೆಯನ್ನು ಗೊಚ್ಚ ನೀರನ್ನು ಬಾವಿಗೆ ಬಿಟ್ಟು ಗ್ರಾಮದ ಜನರಿಗೆ ಕುಡಿಸಿದ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿ!?
ನಿದ್ರೆಗೆ ಜಾರಿದ , ಜಿಲ್ಲಾ ಆರೋಗ್ಯ ಇಲಾಖೆ .!?
ಚಳಿಗೆ ಬೆಚ್ಚನೆ ಮಲಗಿದ ಗ್ರಾಮ ಪಂಚಾಯತ್ ಆಡಳಿತ ಮಂಡಳಿ.!?
ಗ್ರಾಮದ ಜನರಿಗೆ ಗೊಚ್ಚ ನೀರನ್ನು ಕುಡಿಸಿ ಭ್ರಷ್ಟಾಚಾರದಲ್ಲಿ ಮುಳುಗಿ ನೀರಿನಲ್ಲಿ ತೇಲುತ್ತಿರುವ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್.!?
ಗ್ರಾಮಸ್ಥರಿಗೆ ಹೊಳೆ ನೀರು ಕುಡಿಸಿದ ಗ್ರಾಮ ಪಂಚಾಯತ್ ಹೊಂಬಾಡಿ ಮಂಡಾಡಿ ಗ್ರಾಮಪಂಚಾಯತ್ ಹುಣ್ಸೆಮಕ್ಕಿಯ ಯಡಾಡಿ ಮತ್ಯಾಡಿ ಗ್ರಾಮದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಗ್ರಾಮದ ಮೂರು ಕಡೆ ಪ್ರಧಾನಮಂತ್ರಿ ಜಲಜೀವನ್ ಮಿಷನ್ ಯೋಜನೆಯ ಅಡಿ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ.ಈ ಮೂರು ಕಡೆಗೆ ನೀರಿನ ವ್ಯವಸ್ಥೆ ಗಾಗಿ ಗುಡ್ಡಟ್ಟು ಸೇತುವೆಯ ಬಳಿ ಬಾವಿಯನ್ನು ಮಾಡಿ ಅದರಿಂದ 3ಕಡೆ ನೀರು ಹೋಗಲು ಅವಕಾಶ ಮಾಡಿರುತ್ತಾರೆ.ಹೊಳೆಯಲ್ಲಿ ನೀರು(ಕಿರು ಅಣೆಕಟ್ಟು ಹಾಕಿರುತ್ತಾರೆ) ಇದ್ದರೂ ಬಾವಿಯಲ್ಲಿ ನೀರು ಇರುವುದಿಲ್ಲ.ಈ ಕಾರಣಕ್ಕಾಗಿ ಘನವೆತ್ತ ನಮ್ಮ ಪಂಚಾಯತ್ ನವರು 5 ಹೆಚ್.ಪಿ ನೀರಿನ ಮೋಟಾರ್ ಅನ್ನು ಹೊಳೆಗೆ ಅಳವಡಿಸಿ ಅದರಿಂದ ನೇರವಾಗಿ ಬಾವಿಯ ಪಕ್ಕದಲ್ಲಿ ಬಾವಿಗೆ ನೀರು ತುಂಬಿಸಿ ಬಾವಿಗೆ10ಹೆಚ್.ಪಿ ಮೋಟಾರ್ ನಿಂದ ಟ್ಯಾಂಕ್ಗಳಿಗೆ ನೀರು ತುಂಬಿಸಿ ಅದನ್ನು ಸತತವಾಗಿ 1 ರಿಂದ 2 ವರ್ಷಗಳ ಕಾಲ ಜನತೆಗೆ ಹೊಳೆಯ ಗಲೀಜು ನೀರನ್ನು ಕುಡಿಸುವಲ್ಲಿ ಸಫಲರಾಗಿರುವುದು ವಿಪರ್ಯಾಸ ವೇ ಸರಿ.* ಇದನ್ನು ಅರಿತು ರವಿ ಮೊಗವೀರ ಗುಡ್ಡಟ್ಟು ಅವರು ಪಂಚಾಯತ್ ಸದಸ್ಯರ ಸಭೆಯ ದಿನ ಪಂಚಾಯತ್ ಗೆ ಅದೇ ನೀರನ್ನು ತುಂಬಿಸಿಕೊಂಡು ಹೋಗಿ ಕೇಳಿದಾಗ 2ದಿನ ಸಮಯಾವಕಾಶ ಕೇಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಮಧೂಸೂಧನ್ ಸರ್ ಸ್ಥಳ ಪರಿಶೀಲನೇ ಮಾಡಿ ಇದಕ್ಕೆ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿರುತ್ತಾರೆ.ನಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದಾದ ಕುಡಿಯುವ ನೀರಿನ ವ್ಯವಸ್ಥೆ ಗೆ ಶಾಶ್ವತ ಪರಿಹಾರ ನೀಡಲು ವಿಪಲವಾದರೇ ಮುಂದಿನ ದಿನಗಳಲ್ಲಿ ಪಂಚಾಯತ್ ಎದುರಿನಲ್ಲಿ ಹೋರಾಟ ಮಾಡುವುದಾಗಿ ಎಂದು ರವಿ ಮೊಗವೀರ ಗುಡ್ಡಟ್ಟು ಅವರು ಹೇಳಿದ್ದಾರೆ.








