ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿ ಕೆಂಪಿನಕೋಟೆ ಎಂಬ ಗ್ರಾಮ ಈ ಊರಿನ ದೌರ್ಭಾಗ್ಯ ಅಭಿವೃದ್ಧಿಯಲ್ಲಿ ಕುಂಟಿತವಾಗಿದೆ ಇದರ ಬಗ್ಗೆ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಈ ಗ್ರಾಮಕ್ಕೆ ಯಾವುದೇ ಒಂದು ಸರಿಯಾದ ರಸ್ತೆ ಇರುವುದಿಲ್ಲ.
ಸುಮಾರು 15 20 ವರ್ಷಗಳಿಂದ ಮಣ್ಣಿನ ರೋಡಿನಲ್ಲಿ ಹೋರಾಡುವ ಪರಿಸ್ಥಿತಿ ಗ್ರಾಮಸ್ಥರಿಗೆ ಬಂದಿದೆ ಹಾಗೂ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆಗೆ ಹೋಗಬೇಕೆಂದರೆ ಯಾವುದೇ ಬಸ್ಸಿನ ವ್ಯವಸ್ಥೆ ಇರುವುದಿಲ್ಲ ಒ ಆರೋಗ್ಯ ಸರಿ ಇಲ್ಲ ಅಂದರೆ ಇಲ್ಲಿಂದ ಎಂಬ ಗ್ರಾಮಕ್ಕೆ ಕಾಮಗಾರಿ ಆಗಿರುವುದಿಲ್ಲ ಹಾಗೂ ಮಳೆಗಾಲದಲ್ಲಿ ಈ ಗ್ರಾಮಕ್ಕೆ ಓಡಾಡಲು ಜನಗಳು ಬಹಳ ಪರಿತಪ ಪಡುತ್ತಿದ್ದಾರೆ.
ಇವರಿಗೆ ಯಾವುದೇ ಒಂದು ಬಸ್ಸಿನ ಸೌಕರ್ಯವು ಇರುವುದಿಲ್ಲ ಹಾಗೂ ಈ ಊರಿನ ಗ್ರಾಮದ ಶಾಲೆಯು ಕೂಡ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ ಅಂಚಿನ ಮನೆಯಿಂದ ಕೂಡಿದ ಶಾಲೆ ಆಗಲೇ ತೀರುಗಳು ಮುರಿದು ಹೋಗಿದ್ದು ಈಗ ಬೀಳುವ ಸ್ಥಿತಿಯಲ್ಲಿದೆ ಇದರ ಬಗ್ಗೆ ಗ್ರಾಮಸ್ಥರು ಇಲ್ಲಿನ ಶ್ರವಣಬೆಳಗೊಳ ಕ್ಷೇತ್ರದ ಶಾಸಕರನ್ನು ಹಲವಾರು ಬಳಿ ಬಾರಿ ಈ ಊರಿನ ಸಮಸ್ಯೆಯನ್ನು ಹೇಳಿಕೊಂಡರು ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಯಲ್ಲಿ ಕುಂಠಿತವಾಗಿದ್ದು ಇಲ್ಲಿನ ಶಾಲೆಯ ಕಟ್ಟಡ ಶೀತಲವಾಗಿದ್ದು ಈಗಲೂ ಆಗಲು ಬೀಳುವ ರೀತಿ ಇದೆ.
ಇಲ್ಲಿನ ಶಿಕ್ಷಣಾಧಿಕಾರಿಗಳು ಈ ಶಾಲೆಯನ್ನು ಗಮನಹರಿಸಿ ಶಾಲೆಯ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕಾಗಿದೆ ಈ ಶಾಲೆಯ ಶೌಚಾಲಯವನ್ನು ಅರ್ಧಕ್ಕೆ ಕಟ್ಟಿ ಬಿಟ್ಟಿದ್ದಾರೆ ಇಲ್ಲಿ ಮಕ್ಕಳಿಗೆ ಶೌಚಾಲದ ವ್ಯವಸ್ಥೆಯು ಕೂಡ ಸರಿಯಾಗಿ ಇರುವುದಿಲ್ಲ ಈ ಶೌಚಾಲಯದ ಕಾಮಗಾರಿಯನ್ನು ಪೂರ್ಣ ಗೊಳಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕಾಗಿದೆ ಕ್ಷಣ ಮಾನ್ಯ ಜನಪ್ರತಿನಿಧಿಗಳು ಈ ಊರಿಗೆ ಭೇಟಿಕೊಟ್ಟು ಇವರಿಗೆ ಆಗಬೇಕಾದಂತ ಕೆಲಸಗಳನ್ನು ಮಾಡಿಕೊಟ್ಟು ಜನರ ಪ್ರೀತಿಗೆ ಪಾತ್ರರಾಗಬೇಕಾಗಿ ಪಬ್ಲಿಕ್ ಫೈಲ್ ಅಭಿಲಾಷೆ ಕೂಡ.
ಇದುವರೆಗೂ ಶಾಸಕರು ಯಾವುದೇ ರೀತಿ ಗಮನಹರಿಸದೆ ಈ ಊರನ್ನು ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ ಈ ಗ್ರಾಮದಲ್ಲಿ ಹಿಂದುಳಿದ ವರ್ಗದ ಜನಾಂಗದವರು ಹೆಚ್ಚಿನವರು ಇದ್ದು ಇಲ್ಲಿ ಹೆಚ್ಚು ವಿದ್ಯಾವಂತರು ಇಲ್ಲದ ಕಾರಣ ಇಲ್ಲಿ ಯಾರು ಅಷ್ಟಾಗಿ ಪ್ರಶ್ನೆ ಮಾಡಿ ಕೇಳಲು ಹೋಗಿರುವುದಿಲ್ಲ.
ಆದರೆ ಪ್ರತಿ ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಮಾತ್ರ ಜನಪ್ರತಿನಿಧಿಗಳು ಊರಿಗೆ ಭೇಟಿ ಕೊಟ್ಟು ಕೇವಲ ಚುನಾವಣೆ ಗೋಸ್ಕರ ಆಶ್ವಾಸನೆಗಳನ್ನು ಮಾತ್ರ ಕೊಟ್ಟು ಹೋಗುತ್ತಾರೆ ಚುನಾವಣೆ ಮುಗಿದ ನಂತರ ಹೋದಂತ ಜನಪ್ರತಿನಿಧಿಗಳು ಇತ್ತ ತಿರುಗಿ ಕೂಡ ಈ ಗ್ರಾಮವನ್ನು ನೋಡುವುದಿಲ.
ಈ ಗ್ರಾಮಕ್ಕೆ ಈ ಗ್ರಾಮದತ್ತ ಶಾಸಕರು ಗಮನ ಹರಿಸದ ಕಾರಣ ಈ ಗ್ರಾಮ ಅಭಿವೃದ್ಧಿಯಲ್ಲಿ ತುಂಬಾ ಕುಂಠಿತವಾಗಿದೆ ನಿಮ್ಮ ಗ್ರಾಮವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಆಶ್ವಾಸನೆ ಕೊಟ್ಟು ಹೋದಂತ ಜನಪ್ರತಿನಿಧಿಗಳು ಇದುವರೆಗೂ ಊರಿನ ಕಡೆ ತಿರುಗಿ ಕೂಡ ನೋಡಿರುವುದಿಲ್ಲ .
ನಮ್ಮ ಊರು ಅಭಿವೃದ್ಧಿ ಆಗದೆ ಇರುವುದಕ್ಕೆ ಕಾರಣಕರ್ತರು ನೇರ ಹೊಣೆಗಾರರಾಗಿರುತ್ತಾರೆ ಎಂದು ಗ್ರಾಮಸ್ಥರು ಗ್ರಾಮಸ್ಥರ ಅಕ್ರೋಶ ಶಾಸಕರ ವಿರುದ್ಧ. ಈಗಲಾದರೂ ಶಾಸಕರು ಈಗಲಾದರೂ ಶಾಸಕರು ಈ ಊರಿನತ್ತ ಗಮನಹರಿಸಿ ಗ್ರಾಮವನ್ನು ಅಭಿವೃದ್ಧಿಪಡಿಸಬೇಕೆನ್ನುವುದೇ ಪಬ್ಲಿಕ್ ಫೈಲ್ ಆಗ್ರಾ ಆಗಿರುತ್ತೆ.
ಈ ಗ್ರಾಮದತ್ತಗಮನಹರಿಸಿ ಆಗಬೇಕಾದಂತ ಮೂಲಭೂತ ಸೌಕರ್ಯಗಳು ಕುಡಿಯುವ ನೀರು ಚರಂಡಿ ರಸ್ತೆ ಬಸ್ಸಿನ ವ್ಯವಸ್ಥೆಯನ್ನು ಮಾಡಿಕೊಟ್ಟು ಗ್ರಾಮಸ್ಥರ ಮೆಚ್ಚುಗೆಗೆ ನೀವು ಪಾತ್ರರಾಗಬೇಕೆನ್ನುವುದೇ ಪಬ್ಲಿಕ್ ಮೇಲ ಆಶ್ರಯ ಆಗಿರುತ್ತೆ.
ಗ್ರಾಮಸ್ಥರು ತಮ್ಮ ಅಳಲನ್ನು ಹೇಳಿಕೊಂಡಿದ್ದಾರೆ ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕ್ ಬಳಿ.
ಇಲ್ಲಿನ ಗ್ರಾಮ ಪಂಚಾಯಿತಿ ಪ್ರಭಾವಿ ವ್ಯಕ್ತಿಗಳಿಂದ ಎಲ್ಲಾ ಸೌಲಭ್ಯ ಇರುವಂತವರಿಗೆ ಮನೆಯನ್ನು ಕೊಟ್ಟು ಬಡವರಿಗೆ ಮನೆ ಇಲ್ಲದಂತೆ ಮಾಡಿರುತ್ತಾರೆ ಎಂದು ಹಲವಾರು ಮಹಿಳೆಯರು ಊರಿನ ಹಿರಿಯ ನಾಗರಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಪಬ್ಲಿಕ್ ಫೈಲ್ ಬಳಿ. ಈಗಲಾದರೂ ಜನಪ್ರತಿನಿಧಿಗಳು ಈ ಊರಿನ ಅಭಿವೃದ್ಧಿ ಕಡೆ ಗಮನ ನಿಜವಾಗಿ ಸೌಲಭ್ಯ ಇಲ್ಲದೇ ಇರುವ ಬಡ ಜನತೆಗೆ ಸೌಲಭ್ಯವನ್ನು ಒದಗಿಸಿ ಕೊಡಬೇಕೆನ್ನುವುದು ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕ್ ನ ಅಭಿಲಾಷೆ ಆಗಿರುತ್ತೆ.
ಇಲ್ಲವಾದರೆ ಗ್ರಾಮಸ್ಥರು ಮುಂದೆ ಬರುವಂತ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಹೇಳಿರುತ್ತಾರೆ ಪಬ್ಲಿಕ್ ಫೈಲ್ ನ್ಯೂಸ್ ನೆಟ್ವರ್ಕಿನ ಬಳಿ ಹಾಗೂ ಮತದಾನದ ಬಹಿಷ್ಕಾರವನ್ನು ಮಾಡುವುದಾಗಿ ಎಚ್ಚರಿಕೆಯನ್ನು ಕೊಟ್ಟಿರುತ್ತಾರೆ
ಗ್ರಾಮಸ್ಥರು.
ವರದಿ:
ಶಂಕರೇಗೌಡ ಹುಲಿಕೆರೆ








